Monday, March 11, 2013

ಲಾವಣ್ಯದ 36ನೇ ವಾರ್ಷಿಕೋತ್ಸವ





ಲಾವಣ್ಯದ 36ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ: 24-02-2013ನೇ ಭಾನುವಾರ ಶ್ರೀ ಶಾರದಾ ವೇದಿಕೆಯಲ್ಲಿ ಲಾವಣ್ಯದ ಅಧ್ಯಕ್ಷರಾದ ಬಿ. ರಾಮ ಟೈಲರ್ ಅಧ್ಯಕ್ಷತೆಯಲ್ಲಿ ಜರುಗಿತು. ವಿನೋದ ಗಂಗೊಳ್ಳಿ ಇವರನ್ನು ಸನ್ಮಾನಿಸಲಾಯಿತು. ಜೇಸಿಯ ರಾಷ್ಟ್ರೀಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಸದಾನಂದ ನಾವಡ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು ಪ್ರಧಾನ ಕಾರ್ಯದರ್ಶಿ ಬಿ. ಕೃಷ್ಣಮೂರ್ತಿ ಕಾರಂತ, ಗೌರವಾಧ್ಯಕ್ಷ ಸದಾಶಿವ ಡಿ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಲಾವಣ್ಯದ ಕಲಾವಿದರಿಂದ ರಾಜೇಂದ್ರ ಕಾರಂತರು ರಚಿಸಿ ನಿರ್ದೇಶಿದ 'ಮರಣ ಮೃದಂಗ' ನಾಟಕ ಯಶಸ್ವಿಯಾಗಿ ಪ್ರದರ್ಶನ ಕಂಡಿತು.

ಲಾವಣ್ಯದ ನೂತನ ಕಾರ್ಯಕಾರಿ ಸಮಿತಿ

ಗೌರವಾಧ್ಯಕ್ಷರು    : ಸದಾಶಿವ ಡಿ.
ಅಧ್ಯಕ್ಷರು : ರಾಮ ಟೈಲರ್
ಉಪಾಧ್ಯಕ್ಷರು : ರವೀಂದ್ರ ಶ್ಯಾನುಭಾಗ್, ಕೆ. ನಾರಾಯಣ
ಪ್ರಧಾನ ಕಾರ್ಯದರ್ಶಿ : ಬಿ. ಕೃಷ್ಣಮೂರ್ತಿ ಕಾರಂತ
ಜೊತೆ ಕಾರ್ಯದರ್ಶಿ : ಬಿ ನಾಗರಾಜ ಕಾರಂತ, ವಿಶ್ವನಾಥ ಆಚಾರ್ಯ
ಸಂಘಟನಾ ಕಾರ್ಯದರ್ಶಿ : ಡಿ. ಮೂರ್ತಿ
ಕೋಶಾಧ್ಯಕ್ಷ: ಸುನಿಲ್ ಬೈಂದೂರು
ವ್ಯವಸ್ಥಾಪಕರು: ಯು. ಶ್ರೀನಿವಾಸ ಪ್ರಭು, ಬಿ. ಗಣೇಶ ಕಾರಂತ
ಕಾರ್ಯಕಾರಿ ಸಮಿತಿ ಸದಸ್ಯರು:
ಗಿರೀಶ ಬೈಂದೂರು, ಉದಯ ಆಚಾರ್ಯ, ಗಣಪತಿ. ಎಸ್., ನಾಗೇಂದ್ರ ಬಂಕೇಶ್ವರ, ಸತ್ಯಪ್ರಸನ್ನ, ಯೋಗೀಶ ಬಂಕೇಶ್ವರ,
 ಕೆ.ಜಿ. ಭಟ್, ರಾಜಶೇಖರ, ನರಸಿಂಹ ನಾಯಕ್, ಚಂದ್ರ ಬಂಕೇಶ್ವರ, ದಯಾನಂದ, ನಾಗಪ್ಪ ಬಿ.,ಬಾಲಕೃಷ್ಣ, ನಾಗರಾಜ ಗಾಣಿಗ, ದಿನಕರ ಹೋಬಳಿದಾರ, ವಿಶ್ವನಾಥ ಶೆಟ್ಟಿ, ಗೋಪಾಲ ಗಾಣಿಗ.
 
         
                      ಬಿ. ರಾಮ ಟೈಲರ್                       


                                
ಬಿ. ಕೃಷ್ಣಮೂತಿ೵ ಕಾರಂತ

Monday, September 17, 2012

ಕಾಡುತಿಹುದೀ ರಂಗ ತರಂಗ ಪುಸ್ತಕ ಬಿಡುಗಡೆ ಸಮಾರಂಭ

ಬೈಂದೂರಿನ ಹೆಮ್ಮೆಯ ನಟ-ನಿರ್ದೇಶಕ-ಸಂಘಟಕ ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗ ಪ್ರಶಸ್ತಿ ಪುರಸ್ಕ್ರತ ಲಾವಣ್ಯದ ಶ್ರೀ ಗಣೇಶ ಕಾರಂತರವರ ಸಂವೇದನಾ ಟ್ರಸ್ಟ್ ನಾಯ್ಕನಕಟ್ಟೆ ಯವರು ಪ್ರಕಟಿಸಿರುವ ಡಾ| ಸುಬ್ರಹ್ಮಣ್ಯ ಭಟ್ ಅವರು ಬರೆದಿರುವ "ಕಾಡುತಿಹುದೀ ರಂಗ ತರಂಗ" ಪುಸ್ತಕ ಬಿಡುಗಡೆ ಸಮಾರಂಭ.






Thursday, May 10, 2012

ಆಲಿಬಾಬಾ ಮತ್ತು 40 ಕಳ್ಳರು ಲಾವಣ್ಯ ಮಕ್ಕಳ ತಂಡದ ನಾಟಕ



ಲಾವಣ್ಯ (ರಿ.) ಬೈಂದೂರು ಇದರ ಮಕ್ಕಳ ಬೇಸಿಗೆ ರಂಗ ತರಬೇತಿಯಲ್ಲಿ ಮೂಡಿ ಬಂದ ನಾಟಕ ಆಲಿಬಾಬಾ ಮತ್ತು 40 ಕಳ್ಳರು. ರಚನೆ: ಚಂದ್ರಶೇಖರ ಕಂಬಾರ, ಗೌರವ ನಿರ್ದೇಶನ : ಜಿ ಸೀತಾರಾಮ ಶೆಟ್ಟಿ ಕೂರಾಡಿ ನಿರ್ದೇಶನ : ಗಣೇಶ ಕಾರಂತ್ ಬೈಂದೂರು

Wednesday, August 24, 2011

ಲಾವಣ್ಯದ ಗಣೇಶ ಕಾರಂತರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ











ಶ್ರೀ ಗಣೇಶ ಕಾರಂತ ಬೈಂದೂರು, ಸಂಘಟಕ-ನಟ-ನಿರ್ದೇಶಕ ಲಾವಣ್ಯ(ರ.) ಬೈಂದೂರು ಇವರು ಕನ್ನಡ ರಂಗಭೂಮಿಗೆ ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ದಿನಾಂಕ 20-08-2011ನೇ ಶನಿವಾರ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ನಡೆದ ಕರ್ನಾಟಕ ನಾಟಕ ಅಕಾಡೆಮಿಯ ಚಿನ್ನದ ಹಬ್ಬದ ಸಂದರ್ಭದಲ್ಲಿ ರಂಗ ಪ್ರಶಸ್ತಿ ನೀಡಿ ಗೌರವಿಸಿರುತ್ತದೆ. ಸಮಾರಂಭದಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ ಬಿ.ವಿ. ರಾಜಾರಾಂ, ಹಿರಿಯ ನುಡಿ ತಜ್ಞರಾದ ಪ್ರೊ ಜಿ. ವೆಂಕಟಸುಬ್ಬಯ್ಯ, ಹಿರಿಯ ಕವಿಗಳು ಚಿಂತಕರಾದ ರಾಷ್ಟ್ರಕವಿ ಡಾ ಜಿ. ಎಸ್. ಶಿವರುದ್ರಪ್ಪ, ಪ್ರಶಸ್ತಿ ವಿಜೇತ ಚಲನಚಿತ್ರ ನಟ ಶ್ರೀ ಎಚ್. ಟಿ. ದತ್ತಾತ್ರೇಯ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಯುಕ್ತರಾದ ಶ್ರೀ ಮನು ಬಳಿಗಾರ್ ಹಾಗೂ ರಂಗ ಶಂಕರದ ಟ್ರಸ್ಟಿ ಶ್ರೀಮತಿ ಅರುಂಧತಿನಾಗ್ ಉಪಸ್ಥಿತರಿದ್ದರು.

Thursday, April 21, 2011

ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಲಾವಣ್ಯ(ರಿ.) ಬೈಂದೂರಿನ ರಂಗಗೀತೆ ಕಾರ್ಯಕ್ರಮ

ಬೆಳಗಾವಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ 3ನೇ ದಿನವಾದ ಮಾರ್ಚ 13ರಂದು ಸಂಜೆ ಗಂಟೆ 6ರಿಂದ ಏರ್ಪಡಿಸಿದ "ರಂಗಗೀತೆಗಳು" ಕಾರ್ಯಕ್ರಮದಲ್ಲಿ ನಮ್ಮ ತಂಡವು ಯಶಸ್ವಿಯಾಗಿ ಭಾಗವಹಿಸಿ ಶ್ರೋತೃಗಳನ್ನು ರಂಜಿಸಲಾಯಿತು. ಸೂಕ್ತ ವೇಷ ಭೂಷಣ ತೊಟ್ಟ ಮೊರ್ತಿ , ಕೃಷ್ಣಮೊರ್ತಿ ಕಾರಂತ್, ಮನೋಹರ್, ಬಿ. ನಾಗರಾಜ ಕಾರಂತ್, ಯೋಗೀಶ್, ಸತ್ಯಪ್ರಸನ್ನ, ನಾಗೇಂದ್ರ ಬಂಕೇಶ್ವರ, ವಿಶ್ವನಾಥ ಆಚಾರ್ಯ ಇವರ ಭಾವಪೂರ್ಣ ಗೀತೆಗಳು ಜನಮೆಚ್ಚುಗೆ ಗಳಿಸಿದವು.
ಹಾರ್ಮೋನಿಯಂನಲ್ಲಿ ಯು. ಶ್ರೀನಿವಾಸ ಪ್ರಭು, ಕೀ ಬೋರ್ಡ್ ನಲ್ಲಿ ಚಂದ್ರ ಬಂಕೇಶ್ವರ, ತಬಲ, ಚಂಡೆ ವಾದನದಲ್ಲಿ ಗೋಪಾಲಕೃಷ್ಣ ಜೋಶಿ, ಮಿಶ್ರವಾದ್ಯದಲ್ಲಿ ಬಿ. ಗಣೇಶ್ ಕಾರಂತ್, ಮಂಜುನಾಥ್ ಶಿರೂರು ಸಹಕರಿಸಿದರು. ಗಣಪತಿ ಎಸ್ ನಿರೂಪಣೆಗೈದರು, ಲಾವಣ್ಯದ ಅಧ್ಯಕ್ಷ ಗಿರೀಶ್ ಬೈಂದೂರು ಉಪಸ್ಥಿತರಿದ್ದರು.










Saturday, July 12, 2008

ಪ್ರಾರ್ಥನೆ

ಬೆಳಗಲಿ ಬಾಳಲಿ /
ಲಾವಣ್ಯಬೆಳಗಲಿ ಬಾಳಲಿ //
ಶುಭಕರಿ ಶಾರದೆ ಹರಸು ನೀ ಸತತ //ಬೆಳಗಲಿ//

ನೃತ್ಯ ಲಲಿತಕಲೆ ನಾಟಕಗಾನ
ನವನವರೂಪಕದಿಂ ಮನರಂಜನ /
ಸೇವೆಯ ಧ್ಯೇಯವನಾಂತು ಸಂಭ್ರಮದಿ
ಸ್ನೇಹದ ಸೌರಭ ಸೂಸುತ ಮುದದಿ //ಬೆಳಗಲಿ//

ಯಶ ನೀಡು ಎಮಗೆ ಶ್ರೀಶಾ
ಶುಭವನ್ನು ನೀಡು ವಿಘ್ನೇಶಾ
ನಟವರ ಶಂಕರ ಪೊರೆ ಸೇನೇಶ್ವರ //ಬೆಳಗಲಿ//

ಲಾವಣ್ಯದ ಹುಟ್ಟು ಮತ್ತು ಬೆಳವಣಿಗೆ

ಬೈಂದೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ "ಲಾವಣ್ಯ" ೧೯೭೭ರಲ್ಲಿ ಹುಟ್ಟಿದ್ದು ಒಂದು ಆಕಸ್ಮಿಕ ಘಟನೆ. ಈ ಪರಿಸರದ ಹವ್ಯಾಸಿ ಕಲಾವಿದರಾದ ಯು. ಶ್ರೀನಿವಾಸ ಪ್ರಭು, ಬಿ. ಗಣೇಶ್ ಕಾರಂತ್, ಬಿ. ಕೃಷ್ಣ ಅಡಿಗ, ರಾಮ ಟೈಲರ್, ಅನಿಲ್ ಕುಮಾರ್, ಆರ್.ಡಿ. ಟೈಲರ್, ವಿ. ಆರ್ ಬಾಲಚಂದ್ರ, ಉಮೇಶ್ ಕುಮಾರ್, ದಿ ಮೋಹನ್ ನಾಯಕ್, ದಿರತ್ನಾಕರ್ ಆಚಾರ್ ಇವರೆಲ್ಲಾರ ಆಶಾ ಕೇಂದ್ರವಾಗಿ ಕುಡಿಯೊಡೆದ ಬೈಂದೂರು ತರುಣ ಕಲಾವೃಂದ, ಲಾವಣ್ಯ ಕಲಾವೃಂದವಾಗಿ, ಲಾವಣ್ಯ-ಬೈಂದೂರು, ಹವ್ಯಾಸಿ ಕಲಾ ಸಂಸ್ಥೆಯಾಗಿ ಬೆಳೆದು ಬಂದ ದಿನಗಳ ನೆನಪು ರೋಮಾಂಚಕ.
೧೯೮೦ರಲ್ಲಿ ’ರೊಟ್ಟಿ ಖುಣ’ ನಾಟಕವನ್ನು ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿ ಪ್ರಥಮ ಪಾರಿತೋಷಕ ಹಾಗೂ ಇತರ ಮೊರು ಪಾರೀತೋಷಕ ಪಡೆಯಿತು. ಬೈಂದೂರಿನ ಇತಿಹಾಸದಲ್ಲೆ ಪ್ರಥಮ ಬಾರಿಗೆ ಪ್ರಥಮ ಹಾಗೂ ಇತರ ಮೊರು ಪಾರಿತೋಷಕಗಳನ್ನು ಪಡೆದು ಬೈಂದೂರಿನ ಜನತೆ ಭೇಷ್ ಎನ್ನುವಂತಾಯಿತು. ಅಂದಿನಿಂದ ಹೊಸ ಹೊಸ ಸದಸ್ಯರು ಸೇರುತ್ತಾ ಬಂದರು. ಅಂತು ೧೯೭೭ ರಿಂದ ’ತರುಣ ಕಲಾವಿದರು’, ’ತರುಣ ಕಲಾವೃಂದ’, ’ಲಾವಣ್ಯ ಕಲಾವೃಂದ ಎಂಬ ಹೆಸರಿನಿಂದ ಕರೆಯಿಸಿಕೊಂಡು ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ನೋಂದಾಯಿಸಲ್ಪಟ್ಟ ಈ ಸಂಸ್ಥೆ "ಲಾವಣ್ಯ(ರಿ) ಬೈಂದೂರು" ಎಂಬ ನೂತನ ನಾಮಕರಣದೊಂದಿಗೆ ಯಶಸ್ವಿ ೩೦ವರ್ಷಗಳನ್ನು ಪೂರೈಸುತ್ತಾ ಬಂತು.
ಪ್ರಾರಂಭದ ಕೆಲವು ವರ್ಷಗಳಲ್ಲಿ ಕೇವಲ ಕಲಾವಿದರು ಮಾತ್ರ ತಂಡದ ಸದಸ್ಯರಾಗಿದ್ದು ಯಾವುದೇ ಸದಸ್ಯತ್ವ ಶುಲ್ಕವಿರಲಿಲ್ಲ. ಆರ್ಥಿಕ ಮುಗ್ಗಟ್ಟು ಸದಾ ಕಾಡುತ್ತಿತ್ತು. ನಂತರ ಶ್ರೀ ಪಿ. ಶೇಷಪ್ಪಯ್ಯ ಇವರ ಮಾರ್ಗದರ್ಶನದಲ್ಲಿ ತಂಡವನ್ನು ನಿರ್ದಿಷ್ಟ ನಿಯಮಾವಳಿಗೊಳಪಟ್ಟ ಸಂಸ್ಥೆಯನ್ನಾಗಿ ರೂಪಿಸಿ, ಸದಸ್ಯಸ್ವ ಶುಲ್ಕವನ್ನು ನಿರ್ಧರಿಸಲಾಯಿತು. ಹೊಸಹೊಸ ಸದಸ್ಯರು ಸಂಸ್ಥೆಗೆ ಸೇರಲಾರಂಭಿಸಿದರು. ಸದಸ್ಯರ ಪ್ರಯತ್ನಗಳಿಗೆ ಊರ ಪರಊರ ಕಲಾಭಿಮಾನಿಗಳು ಸ್ಪಂದಿಸಿ ಪ್ರೋತ್ಸಾಹಿಸುತ್ತಾ ಬಂದರು.
ಶ್ರೀ ಪ್ರಭು, ಗಣೇಶ ಕಾರಂತ ಜೋಡಿ ಲಾವಣ್ಯದ ನೇತೃತ್ವವನ್ನು ವಹಿಸಿಕೊಂಡು ಬಂದಿರುತ್ತಾರೆ.ಎರಡು ವರ್ಷಕ್ಕೊಮ್ಮೆ ಕಾರ್ಯಕಾರಿ ಸಮಿತಿಯನ್ನು ಪುನಾ ರಚಿಸುತ್ತಾ ಹೊಸಬರಿಗೆ ಜವಬ್ದಾರಿಯನ್ನು ಹೊರುವ ಅವಕಾಶವನ್ನು ನೀಡುತ್ತಾ ಬಂದಿದ್ದಾರೆ.
ಇಂದಿನ ಹೊಸ ಹೊಸ ಸದಸ್ಯರಿಗೆ, ಯುವ ಪೀಳಿಗೆಗೆ ಹಾಗೂ ಕಲಾಭಿಮಾನಿಗಳಿಗೆ ಲಾವಣ್ಯದ ಹುಟ್ಟಿನ ಬಗ್ಗೆ ವಸ್ತು ಸ್ಥಿತಿ ಗೊತ್ತಿರಲಿ ಎಂಬ ಉದ್ದೇಶದಿಂದ ಇದನ್ನು ಉಲ್ಲೇಖಿಸುತ್ತಿದ್ದೇವೆ.

Friday, July 11, 2008

ಉದ್ದೇಶ

  • ನಾಟಕ, ಯಕ್ಷಗಾನ, ಸಂಗೀತ, ಭರತನಾಟ್ಯ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.
  • ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುವುದು, ನಾಟಕ ಸ್ಪರ್ಧೆ ಹಾಗೂ ಕಲಾ ಉತ್ಸವಗಳನ್ನು ಆಚರಿಸುವುದು.
  • ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡುವುದು, ಪುಟ್ಟ ಕಲಾವಿದರಿಗೆ ಬೆಂಬಲ ನೀಡಿ ಕಲಾರಂಗದಲ್ಲಿ ಅಭಿವೃದ್ದಿಗೆ ತರುವುದು.
  • ಕಲಾ ಪ್ರಸಾರ, ಸಾರ್ವಜನಿಕ ಸೇವೆಗಳನ್ನು ಕಾರ್ಯ ಮುಖೇನ ನಿರ್ವಹಿಸುವುದು, ಸಾಂಸೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು.
  • ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು.
  • ಪ್ರತಿ ವರ್ಷ ವಾರ್ಷಿಕೋತ್ಸವದ ಸಮಯದಲ್ಲಿ ಕಲಾರಂಗದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವುದು ಇವೇ ಮುಖ್ಯವಾದ ಉದ್ದೇಶಗಳನ್ನು ಸಂಸ್ಥೆಯು ಹೊಂದಿರುತ್ತದೆ.

ಸಾಧನೆಗಳು


  • ಲಾವಣ್ಯ ನಾಟಕ ವಿಭಾಗದ ಜೊತೆಗೆ ಮಕ್ಕಳ ನಾಟಕ ವಿಭಾಗ, ಭರತ ನಾಟ್ಯ ವಿಭಾಗ, ಸಂಗೀತ ವಿಭಾಗಗಳ ಮಾರ್ಪಾಟು
  • ಈ ವರೆಗೆ ಸುಮಾರು ೬೦ ನಾಟಕಗಳ ೩೦೦ ಪ್ರದರ್ಶನಗಳ ನೀಡಿಕೆ.
  • ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಇದುವರೆಗೂ ಭಾಗವಹಿಸಿದ ಎಲ್ಲಾ ೨೦ ನಾಟಕ ಸ್ಪರ್ಧೆಗಳಲ್ಲಿ ೯ ಬಾರಿ ಪ್ರಥಮ, ೭ ಬಾರಿ ದ್ವಿತೀಯ ಹಾಗೂ ೪ ಬಾರಿ ತೃತೀಯ ಪಾರಿತೋಷಕವನ್ನು ಅಲ್ಲದೇ ಉತ್ತಮ ನಿರ್ದೇಶನ, ಉತ್ತಮ ನಟನೆ, ಉತ್ತಮ ಸಂಗೀತ, ಉತ್ತಮ ರಂಗ ಸಜ್ಜಿಕೆ ಮತ್ತು ಬೆಳಕು ಹಾಗೂ ಇತರೇ ವಿಭಾಗಗಳಲ್ಲಿ ಒಟ್ಟು ೭೩ ಪಾರಿತೋಷಕಗಳ ಗಳಿಕೆ.
  • ಶ್ರೀ ಜಿ. ಸೀತಾರಾಮ ಶೆಟ್ಟಿ ಕೂರಾಡಿ ಇವರ ನಿರ್ದೇಶನದಲ್ಲಿ ಮಕ್ಕಳ ರಂಗ ತರಬೇತಿ ಶಿಬಿರ.
  • ಊರಿನಲ್ಲಿ ಮಾತ್ರವಲ್ಲದೇ ಪರ ಊರು, ಇತರೇ ಜಿಲ್ಲೆಗಳಲ್ಲೂ ನಾಟಕ ಪ್ರದರ್ಶನಗಳ ನೀಡಿಕೆ.
  • ಪ್ರತಿ ವರ್ಷ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಲವಾರು ಹಿರಿಯ ಕಲಾವಿದರಿಗೆ ಸನ್ಮಾನ.
  • ದಶಮಾನೋತ್ಸವ ಸಂದರ್ಭದಲ್ಲಿ ಬೈಂದೂರಿನಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆ.
  • ವಿಂಶತಿ ಉತ್ಸವ ಸಂದರ್ಭದಲ್ಲಿ ದ್ವಿತೀಯ ಬಾರಿಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆ.
  • ೩೦ನೇ ವರ್ಷದ "ರಂಗ ಲಾವಣ್ಯ-೩೦" ಸಂಭ್ರಮದ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ರಾಜ್ಯ ಮಟ್ಟದ ನಾಟಕೋತ್ಸವ.
  • ರಂಗಶ್ರೀ ೧೦ ದಿನಗಳ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಆಯೋಜನೆ

ಅಭಿನಯಿಸಿದ ನಾಟಕಗಳು

(ಮುಂದುವರೆದ ಭಾಗ)
೬೧. ತಂತಿ (೧) ೬೨. ಕರ್ನಾಟಕ ರಮಾರಮಣ (೪) ೬೩. ಮಹಾನಿರ್ವಾಣ (೧) ೬೪. ದಿವ್ಯ ದರ್ಶನ (೩)

ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಜಯಗಳಿಸಿದ ನಾಟಕಗಳು ಹಾಗೂ ಗಳಿಸಿದ ಪಾರಿತೋಷಕಗಳು



ಲಾವಣ್ಯ ತಂಡದ ವಿವರ