ಶ್ರೀ ಗಣೇಶ ಕಾರಂತ ಬೈಂದೂರು, ಸಂಘಟಕ-ನಟ-ನಿರ್ದೇಶಕ ಲಾವಣ್ಯ(ರ.) ಬೈಂದೂರು ಇವರು ಕನ್ನಡ ರಂಗಭೂಮಿಗೆ ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ದಿನಾಂಕ 20-08-2011ನೇ ಶನಿವಾರ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ನಡೆದ ಕರ್ನಾಟಕ ನಾಟಕ ಅಕಾಡೆಮಿಯ ಚಿನ್ನದ ಹಬ್ಬದ ಸಂದರ್ಭದಲ್ಲಿ ರಂಗ ಪ್ರಶಸ್ತಿ ನೀಡಿ ಗೌರವಿಸಿರುತ್ತದೆ. ಸಮಾರಂಭದಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ ಬಿ.ವಿ. ರಾಜಾರಾಂ, ಹಿರಿಯ ನುಡಿ ತಜ್ಞರಾದ ಪ್ರೊ ಜಿ. ವೆಂಕಟಸುಬ್ಬಯ್ಯ, ಹಿರಿಯ ಕವಿಗಳು ಚಿಂತಕರಾದ ರಾಷ್ಟ್ರಕವಿ ಡಾ ಜಿ. ಎಸ್. ಶಿವರುದ್ರಪ್ಪ, ಪ್ರಶಸ್ತಿ ವಿಜೇತ ಚಲನಚಿತ್ರ ನಟ ಶ್ರೀ ಎಚ್. ಟಿ. ದತ್ತಾತ್ರೇಯ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಯುಕ್ತರಾದ ಶ್ರೀ ಮನು ಬಳಿಗಾರ್ ಹಾಗೂ ರಂಗ ಶಂಕರದ ಟ್ರಸ್ಟಿ ಶ್ರೀಮತಿ ಅರುಂಧತಿನಾಗ್ ಉಪಸ್ಥಿತರಿದ್ದರು.
Wednesday, August 24, 2011
Subscribe to:
Post Comments (Atom)
No comments:
Post a Comment